A- A A+
2023-24 ನೇ ಸಾಲಿನಲ್ಲಿ ಉಪ ವಲಯ ಅರಣ್ಯಾಧಿಕಾರಿ ಕಂ ಮೋಜಣಿದಾರ, ಗಸ್ತು ವನಪಾಲಕ ಮತ್ತು ಅರಣ್ಯ ವೀಕ್ಷಕರ ಸಾಮಾನ್ಯ ವರ್ಗಾವಣೆಗಾಗಿ ಅಧಿಸೂಚನೆ. ದಿನಾಂಕ:19-05-2023 2023-24 ನೇ ಸಾಲಿನ ಮೊದಲನೇ ತ್ರೈಮಾಸಿಕ ಅವಧಿಗೆ ಉಪ ವಲಯ ಅರಣ್ಯಾಧಿಕಾರಿ ಕಂ ಮೋಜಣಿದಾರ, ಗಸ್ತು ವನಪಾಲಕ, ಅರಣ್ಯ ವೀಕ್ಷಕರ ಕಂಟಿಂಜೆಂಟ್‌ ವರ್ಗಾವಣೆ/ ಸ್ಥಳ ನಿಯುಕ್ತಿಗಾಗಿ ಅಧಿಸೂಚನೆ. ದಿನಾಂಕ:19-05-2023 ದಿನಾಂಕ: 15-05-2023 ರಿಂದ ದಿನಾಂಕ: 18-05-2023 ರವೆರಗೆ ಜರುಗಿಸಲಾಗುತ್ತಿರುವ ಕಂಟಿಂಜೆಂಟ್‌ ಸ್ಥಳ ನಿಯುಕ್ತಿಯ ಸಮಾಲೋಚನೆಯ ದೈನಂದಿನ ವರದಿಗಳು. ಪೂರಕ ಅಧಿಸೂಚನೆ ಸಂಖ್ಯೆ: KFD/HOFF/B9(MSC)/1/2020-PnR-KFD, dated: 02-05-2023ಕ್ಕೆ ತಿದ್ದುಪಡಿ. ಸಮಾಲೋಚನಾ ಆದ್ಯತಾ ಪಟ್ಟಿ (ದಿನಾಂಕ, ಸಮಯ ಮತ್ತು ಸ್ಥಳದ ವಿವರದೊಂದಿಗೆ) ಯ ಕುರಿತು ಅಧಿಸೂಚನೆ 2023ನೇ ಕ್ಯಾಲೆಂಡರ್‌ ವರ್ಷದಲ್ಲಿ ವಿವಿಧ ಸರ್ಕಾರಿ ಮರಮಟ್ಟು ಸಂಗ್ರಹಾಲಯಗಳಲ್ಲಿ ಇ-ಹರಾಜು ಮಾಡಲು ದಿನಾಂಕಗಳನ್ನು ನಿಗಧಿಪಡಿಸುವ ಕುರಿತು. ದಿನಾಂಕ: 15-05-2023 2023ನೇ ಕ್ಯಾಲೆಂಡರ್‌ ವರ್ಷದಲ್ಲಿ ವಿವಿಧ ಸರ್ಕಾರಿ ಮರಮಟ್ಟು ಸಂಗ್ರಹಾಲಯಗಳಲ್ಲಿ ಇ-ಹರಾಜು ಮಾಡಲು ದಿನಾಂಕಗಳನ್ನು ನಿಗಧಿಪಡಿಸುವ ಕುರಿತು. ದಿನಾಂಕ: 12-05-2023

ವಿಭಾಗದ ಮುಖ್ಯಸ್ಥರು

ಶ್ರೀ. ಪ್ರಭಾಷ್‌ ಚಂದ್ರ ರೇ , ಭಾ.ಅ.ಸೇ

ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಕಾಂಪಾ)
ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಕಾಂಪಾ), 1 ನೇ ಮಹಡಿ, ಅರಣ್ಯ ಭವನ, 18 ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು -560003
campa.y2010@gmail.com

ವಿಭಾಗದ ಬಗ್ಗೆ

ಮಾನ್ಯ ಸರ್ವೋಚ್ಛ ನ್ಯಾಯಾಲಯವು ರಿಟ್ ಅರ್ಜಿ (ನಾಗರಿಕ) ಸಂಖ್ಯೆ 202/1995ರ ಮೇಲಿನ ಮಧ್ಯಂತರ ಅರ್ಜಿ ಸಂಖ್ಯೆ 566 ಕ್ಕೆ 30-10-2002 ರಲ್ಲಿ ನೀಡಿದ ಆದೇಶದ ಮೇರೆಗೆ ಭಾರತ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯವು ತನ್ನ 23-04-2004ರ ಆದೇಶದಲ್ಲಿ ಪರಿಹಾರಾತ್ಮಕ ನೆಡುತೋಪು ನಿಧಿ ನಿರ್ವಹಣೆ ಮತ್ತು ಯೋಜನ ಪ್ರಾಧಿಕಾರವನ್ನು ರಚಿಸಿದೆ. ಅರಣ್ಯ ಪ್ರದೇಶವನ್ನು ಅರಣ್ಯೇತರ ಉದ್ದೇಶಕ್ಕಾಗಿ ಬಿಡುಗಡೆ ಮಾಡುವಾಗ ಸಂಗ್ರಹಿಸಲಾಗುವ ಪರಿಹಾರಾತ್ಮಕ ನೆಡುತೋಪು ನಿರ್ವಹಣೆ ಮೊತ್ತ, ಅರಣ್ಯ ಪ್ರದೇಶ ನಿವ್ವಳ ಮೌಲ್ಯ (ಎನ್.ಪಿ.ವಿ.) ಮತ್ತು ಮಾನ್ಯ ಸರ್ವೋಚ್ಛ ನ್ಯಾಯಾಲಯವು ಈ ಬಗ್ಗೆ ನೀಡಿರುವ ಆದೇಶದ ಮೇರೆಗೆ ಸಂಗ್ರಹಿಸಲಾಗುವ ಇತರೆ ಹಣವನ್ನು ನಿರ್ವಹಣೆ ಮಾಡುವ ಉದ್ದೇಶದಿಂದ ಕಾಂಪಾ ಯೋಜನೆಯನ್ನು ರಚಿಸಲಾಗಿದೆ. ಕಾಂಪಾ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ಮತ್ತು ಅನುದಾನ ನಿರ್ವಹಣೆ ಕುರಿತಂತೆ ಮಾರ್ಗಸೂಚಿಯನ್ನು ಭಾರತ ಸರ್ಕಾರದ ಅರಣ್ಯ ಮತ್ತು ಪರಿಸರ ಸಚಿವಾಲವು ದಿನಾಂಕ: 02-07-2009ರಲ್ಲಿ ನೀಡಿದೆ. ಕಾಂಪಾ ನಿಧಿಯ ಸುರಕ್ಷತೆ, ಭದ್ರತೆ ಹಾಗೂ ಇತರ ವ್ಯವಹಾರಗಳ ಮೇಲ್ವಿಚಾರಣೆ ನಡೆಸಲು ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯ ಮಟ್ಟದ ಸಂಸದೀಯ ಸಭೆ, ರಾಜ್ಯ ಚಾಲನಾ ಸಮಿತಿ ಹಾಗೂ ರಾಜ್ಯ ಕಾರ್ಯಕಾರಿ ಸಮಿತಿಗಳನ್ನು ರಚಿಸಲಾಗಿದೆ. ಮಾನ್ಯ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ರಾಜ್ಯ ಸಂಸದೀಯ ಸಮಿತಿ ರಾಜ್ಯಕ್ಕೆ ಸಂಬಂಧಿಸಿದ ಕಾಂಪಾ ನಿಧಿಯ ಅನುಷ್ಠಾನದ ವಿಶಾಲ ನೀತಿ ಹಾಗು ಕಾರ್ಯವಿಧಾನಗಳು ಹಾಗೂ ವಾರ್ಷಿಕ ವರದಿ, ಆಡಿಟ್ ವರದಿಗಳನ್ನು ಅನುಮೋದಿಸುತ್ತದೆ. ರಾಜ್ಯ ಚಾಲನಾ ಸಮಿತಿ, ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತದೆ ಹಾಗೂ ವಾರ್ಷಿಕ ಕ್ರಿಯಾ ಯೋಜನೆ ಅನುಮೋದನೆ ಹಾಗೂ ಇತರ ಇಲಾಖೆಗಳೊಂದಿಗೆ ಸಮನ್ವಯವನ್ನು ಸಾಧಿಸಲು ಸಹಕಾರ ನೀಡುತ್ತದೆ. ರಾಜ್ಯ ಕಾರ್ಯಕಾರಿ ಸಮಿತಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಕ್ರಿಯಾ ಯೋಜನೆಯನ್ನು ತಯಾರಿಸುವುದು ಹಾಗೂ ಅನುಮೋದನೆಗೊಂಡ ವಾರ್ಷಿಕ ಕ್ರಿಯಾ ಯೋಜನೆಯ ಅನುಷ್ಠಾನದ ಬಗ್ಗೆ ಮೇಲ್ವಿಚಾರಣೆ ಮಾಡುತ್ತದೆ

ಕಾರ್ಯಕ್ರಮಗಳು & ಚಟುವಟಿಕೆಗಳು

ಕಾಂಪಾ ಅಡಿ ಸಸ್ಯಕ್ಷೇತ್ರ,ಶಿವಮೊಗ್ಗ

ಇನ್ನಷ್ಟು ನೋಡಿ

ಎಲ್.ಪಿ.ಜಿ. ವಿತರಣೆ, ಕಾರವಾರ

ಇನ್ನಷ್ಟು ನೋಡಿ

ಶ್ರೀಗಂಧ ನೆಡುತೋಪು, ಶ್ರೀನಿವಾಸಪುರ

ಇನ್ನಷ್ಟು ನೋಡಿ

ಕಾಂಪಾ ಅಡಿ ಸಸ್ಯಕ್ಷೇತ್ರ,ಶಿವಮೊಗ್ಗ

ಇನ್ನಷ್ಟು ನೋಡಿ