ವಿಭಾಗದ ಬಗ್ಗೆ
ಈ ಘಟಕವು ಕರ್ನಾಟಕ ರಾಜ್ಯಾದ್ಯಂತ ಸಂಶೋಧನೆ ಚಟುವಟಿಕೆಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ. ಅರಣ್ಯ ಸಂಶೋಧನೆ ವ್ಯಾಪ್ತಿಯಲ್ಲಿ ನಾಲ್ಕು ಸಂಶೋಧನ ವೃತ್ತಗಳು ಇರುತ್ತವೆ. ಒಂದನ್ನು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಂಶೋಧನೆ) ಬೆಂಗಳೂರು ಹಾಗು ಉಳಿದ ಮೂರು ವೃತ್ತಗಳಾದ ಧಾರವಾಡ, ಮಡಿಕೇರಿ ಮತ್ತು ಬಳ್ಳಾರಿ ವೃತ್ತಗಳಿಗೆ ಅರಣ್ಯ ಸಂರಕ್ಷಣಾಧಿಕಾರಿ ಮುಖ್ಯಸ್ಥರಾಗಿರುತ್ತಾರೆ. ಇವುಗಳಲ್ಲದೇ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಾಮಾಜಿಕ ಅರಣ್ಯ (ಸಂಶೋಧನೆ) ಬೆಂಗಳೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ( ಅರಣ್ಯ ಬಳಕೆ) ಘಟಕಗಳು ಸಹ ಕಾರ್ಯ ನಿರ್ವಹಿಸುತ್ತಿವೆ. ಈ ಎಲ್ಲಾ ವೃತ್ತಗಳು ಹಾಗೂ ವಿಭಾಗಗಳು ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಂಶೋಧನೆ ಮತ್ತು ಬಳಕೆ), ದೊರೆಸಾನಿಪಾಳ್ಯ ಬೆಂಗಳೂರು ರವರ ಅಧೀನದಲ್ಲಿ ಕೆಲಸ ನಿರ್ವಹಿಸುತ್ತವೆ.