A- A A+
* ವನ್ಯಜೀವಿ ಸಪ್ತಾಹ ಆಚರಣೆ-2023: ಕಾರ್ಯಕ್ರಮ ಪಟ್ಟಿ * ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿರುವ 50.02825 MT ರಕ್ತ ಚಂದನ, ಹಾಗೂ ಜಂಟಿ ಆಯುಕ್ತರು, ಕಸ್ಟಮ್ಸ್‌ , ಮಂಗಳೂರು ರವರು ವಶಪಡಿಸಿರುವ 58.370 MT ರಕ್ತ ಚಂದನವನ್ನು ಇ-ಸಂಗ್ರಹಣೆ ಕಂ ಇ-ಹರಾಜಿನಲ್ಲಿ ಹರಾಜು ಮಾಡುವ ಕುರಿತು * ದಿನಾಂಕ:27-07-2023 ರಿಂದ ಕೈಗೊಳ್ಳಲು ನಿಗದಿಪಡಿಸಲಾಗಿದ್ದ ಕಂಟಿಂಜೆಂಟ್‌ ವರ್ಗಾವಣೆ/ಸ್ಥಳನಿಯುಕ್ತಿ ಸಮಾಲೋಚನೆಯನ್ನು ಅನಿವಾರ್ಯ ಕಾರಣಗಳಿಂದ ತಾತ್ಕಾಲಿಕವಾಗಿ ಮುಂದೂಡಲಾಗಿದ್ದು, ಪರಿಷ್ಕೃತ ದಿನಾಂಕಗಳನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗುವುದು. * 2023-24 ನೇ ಸಾಲಿನ ಮೊದಲನೇ ತ್ರೈಮಾಸಿಕದ ಕಂಟಿಂಜೆಂಟ್‌ ವರ್ಗಾವಣೆ/ಸ್ಥಳ ನಿಯುಕ್ತಿಗಾಗಿ ಪರಿಗಣಿಸಲ್ಪಟ್ಟ ಸಿಬ್ಬಂದಿಗಳ ಸಮಾಲೋಚನಾ ಪ್ರಾಧಿಕಾರವಾರು ಮತ್ತು ವೃಂದವಾರು ಆದ್ಯತಾ ಪಟ್ಟಿ ಮತ್ತು ಸಮಾಲೋಚನಾ ಅಧಿಸೂಚನೆ * ಗಮನಿಸಿ: ಮಾನ್ಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ ಅರ್ಜಿ ಸಂಖ್ಯೆ 3632 of 2021 ರಲ್ಲಿ ಆದೇಶ ದಿನಾಂಕ: 14-09-2021 r/w ಮಾನ್ಯ ಉಚ್ಛ ನ್ಯಾಯಾಲಯದ ರಿಟ್‌ ಅರ್ಜಿ ಸಂಖ್ಯೆ: 6125 of 2022 ರಲ್ಲಿನ ಆದೇಶ ದಿನಾಂಕ: 07-06-2022 ಗೆ ಸಂಬಂಧಿಸಿದಂತೆ, ಪ್ರಮುಅಸಂ (ಅಪಮು) ರವರ ಕಛೇರಿ ಆದೇಶ ಸಂಖ್ಯೆ: 60/2021-22, ದಿನಾಂಕ: 28-07-2021 ರಡಿ ವರ್ಗಾವಣೆಗೊಂಡ ಉಪ ವಲಯ ಅರಣಾಧಿಕಾರಿ ಕಂ ಮೋಜಣಿದಾರಿಗೆ ನಿಯಮ 22(iv) ರನ್ವಯ, ಮತ್ತು ಮುಂಬಡ್ತಿಯಿಂದಾಗಿ ಸ್ಥಳ ನಿಯುಕ್ತಿ ಹೊಂದಬೇಕಿರುವ ಸಿಬ್ಬಂದಿಗಳಿಗೆ ನಿಯಮ 22(xv) ರನ್ವಯ A-ಪ್ರವರ್ಗದ ಹುದ್ದೆಗಳನ್ನು ಖಾಲಿ ಮಾಡಬೇಕಿರುವ ಸಿಬ್ಬಂದಿಗಳು ಪ್ರಸಕ್ತ ಚಾಲ್ತಿಯಲ್ಲಿರುವ ಅನಿಶ್ಚಿತ ವರ್ಗಾವಣೆ/ ಸ್ಥಳ ನಿಯುಕ್ತಿ (Contingent transfer/postings) ಅಡಿ ಸ್ಥಳ ನಿಯುಕ್ತಿಗಾಗಿ ಇಲಾಖೆಯ TCMS ಪೋರ್ಟಲ್‌ ನಲ್ಲಿ ಆನ್‌ಲೈನ್‌ ಅರ್ಜಿಯನ್ನು ಸಲ್ಲಿಸಲು ವಿಶೇಷ ಅವಕಾಶದಡಿ ನೀಡಲಾಗಿದ್ದ ಅವಕಾಶವನ್ನು ದಿನಾಂಕ; 19-07-2023 ರವರೆಗೆ ವಿಸ್ತರಿಸಲಾಗಿದೆ. ದಯವಿಟ್ಟು ನಿಮ್ಮ ಅರ್ಜಿಯನ್ನು ಸಲ್ಲಿಸಿ. * ಗಮನಿಸಿ: ಮಾನ್ಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ ಅರ್ಜಿ ಸಂಖ್ಯೆ 3632 of 2021 ರಲ್ಲಿ ಆದೇಶ ದಿನಾಂಕ: 14-09-2021 r/w ಮಾನ್ಯ ಉಚ್ಛ ನ್ಯಾಯಾಲಯದ ರಿಟ್‌ ಅರ್ಜಿ ಸಂಖ್ಯೆ: 6125 of 2022 ರಲ್ಲಿನ ಆದೇಶ ದಿನಾಂಕ: 07-06-2022 ಗೆ ಸಂಬಂಧಿಸಿದಂತೆ, ಪ್ರಮುಅಸಂ (ಅಪಮು) ರವರ ಕಛೇರಿ ಆದೇಶ ಸಂಖ್ಯೆ: 60/2021-22, ದಿನಾಂಕ: 28-07-2021 ರಡಿ ವರ್ಗಾವಣೆಗೊಂಡ ಉಪ ವಲಯ ಅರಣಾಧಿಕಾರಿ ಕಂ ಮೋಜಣಿದಾರಿಗೆ ನಿಯಮ 22(iv) ರನ್ವಯ, ಮತ್ತು ಮುಂಬಡ್ತಿಯಿಂದಾಗಿ ಸ್ಥಳ ನಿಯುಕ್ತಿ ಹೊಂದಬೇಕಿರುವ ಸಿಬ್ಬಂದಿಗಳಿಗೆ ನಿಯಮ 22(xv) ರನ್ವಯ A-ಪ್ರವರ್ಗದ ಹುದ್ದೆಗಳನ್ನು ಖಾಲಿ ಮಾಡಬೇಕಿರುವ ಸಿಬ್ಬಂದಿಗಳು ಪ್ರಸಕ್ತ ಚಾಲ್ತಿಯಲ್ಲಿರುವ ಅನಿಶ್ಚಿತ ವರ್ಗಾವಣೆ/ ಸ್ಥಳ ನಿಯುಕ್ತಿ (Contingent transfer/postings) ಅಡಿ ಸ್ಥಳ ನಿಯುಕ್ತಿಗಾಗಿ ಇಲಾಖೆಯ TCMS ಪೋರ್ಟಲ್‌ ನಲ್ಲಿ ಆನ್‌ಲೈನ್‌ ಅರ್ಜಿಯನ್ನು ಸಲ್ಲಿಸಲು ದಿನಾಂಕ; 15-07-2023 (ಶನಿವಾರ) ರಿಂದ 17-07-2023 (ಸೋಮವಾರ) ವರೆಗೆ ವಿಶೇಷ ಅವಕಾಶ ನೀಡಲಾಗಿದೆ. ದಯವಿಟ್ಟು ನಿಮ್ಮ ಅರ್ಜಿಯನ್ನು ಸಲ್ಲಿಸಿ.-KFDICT * ಅಧಿಸೂಚನೆ ಸಂಖ್ಯೆ: KFD/HOFF/B9(MSC)/1/2020-PnR-KFD(I) & (II), ದಿನಾಂಕ: 19-05-2023 ಗೆ ಸಂಬಂಧಿಸಿದಂತೆ ವೃತ್ತ ಪ್ರಾಧಿಕಾರ ವಾರು ಹುದ್ದೆಗಳ ಮತ್ತು ಸಿಬ್ಬಂದಿಗಳ ಪರಿಷ್ಕೃತ ವಿವರ (30-06-2023 ರಂತೆ) * ಉವಅ ಕಂ ಮೋಜಣಿದಾರರು, ಗಸ್ತು ವನಪಾಲಕರು, ಅರಣ್ಯ ವೀಕ್ಷಕರು 2023-24 ನೇ ಸಾಲಿನ ಸಾಮಾನ್ಯ ವರ್ಗಾವಣೆ/ ಸ್ಥಳ ನಿಯುಕ್ತಿಗಾಗಿ ಹಾಗೂ ಅನಿಶ್ಚಿತ ವರ್ಗಾವಣೆ/ ಸ್ಥಳ ನಿಯುಕ್ತಿಗಾಗಿ ದಿನಾಂಕ: 05-07-2023 ರವರೆಗೆ ತಮ್ಮ ಅರ್ಜಿಗಳನ್ನು ಸಲ್ಲಿಸತಕ್ಕದ್ದು. * ಅಧಿಸೂಚನೆ ಸಂಖ್ಯೆ: KFD/HOFF/B9(MSC)/1/2020-PnR-KFD(I) & (II), ದಿನಾಂಕ: 19-05-2023 ಗೆ ಸಂಬಂಧಿಸಿದಂತೆ ವೃತ್ತ ಪ್ರಾಧಿಕಾರ ವಾರು ಹುದ್ದೆಗಳ ಮತ್ತು ಸಿಬ್ಬಂದಿಗಳ ವಿವರ * 2023-24 ನೇ ಸಾಲಿನ ಕಂಟಿಂಜೆಂಟ್‌ ವರ್ಗಾವಣೆ/ಸ್ಥಳ ನಿಯುಕ್ತಿ ಕುರಿತಂತೆ ಅಧಿಸೂಚನೆ ಸಂಖ್ಯೆ: KFD/HOFF/B9 (MSC)/1/2020-PnR-KFD (II), ದಿನಾಂಕ: 19-05-2023 ಕ್ಕೆ ಪೂರಕ ಅಧಿಸೂಚನೆ, ದಿನಾಂಕ: 28-06-2023 * 2023-24 ನೇ ಸಾಲಿನ ಸಾಮಾನ್ಯ ವರ್ಗಾವಣೆ/ಸ್ಥಳ ನಿಯುಕ್ತಿ ಕುರಿತಂತೆ ಅಧಿಸೂಚನೆ ಸಂಖ್ಯೆ: KFD/HOFF/B9 (MSC)/1/2020-PnR-KFD (I), ದಿನಾಂಕ: 19-05-2023 ಕ್ಕೆ ಪೂರಕ ಅಧಿಸೂಚನೆ, ದಿನಾಂಕ: 28-06-2023 * 2023-24 ನೇ ಸಾಲಿನಲ್ಲಿ ಉಪ ವಲಯ ಅರಣ್ಯಾಧಿಕಾರಿ ಕಂ ಮೋಜಣಿದಾರ, ಗಸ್ತು ವನಪಾಲಕ ಮತ್ತು ಅರಣ್ಯ ವೀಕ್ಷಕರ ಸಾಮಾನ್ಯ ವರ್ಗಾವಣೆಗಾಗಿ ಅಧಿಸೂಚನೆ. ದಿನಾಂಕ:19-05-2023 * 2023-24 ನೇ ಸಾಲಿನ ಮೊದಲನೇ ತ್ರೈಮಾಸಿಕ ಅವಧಿಗೆ ಉಪ ವಲಯ ಅರಣ್ಯಾಧಿಕಾರಿ ಕಂ ಮೋಜಣಿದಾರ, ಗಸ್ತು ವನಪಾಲಕ, ಅರಣ್ಯ ವೀಕ್ಷಕರ ಕಂಟಿಂಜೆಂಟ್‌ ವರ್ಗಾವಣೆ/ ಸ್ಥಳ ನಿಯುಕ್ತಿಗಾಗಿ ಅಧಿಸೂಚನೆ. ದಿನಾಂಕ:19-05-2023 * ದಿನಾಂಕ: 15-05-2023 ರಿಂದ ದಿನಾಂಕ: 18-05-2023 ರವೆರಗೆ ಜರುಗಿಸಲಾಗುತ್ತಿರುವ ಕಂಟಿಂಜೆಂಟ್‌ ಸ್ಥಳ ನಿಯುಕ್ತಿಯ ಸಮಾಲೋಚನೆಯ ದೈನಂದಿನ ವರದಿಗಳು. * ಸಮಾಲೋಚನಾ ಆದ್ಯತಾ ಪಟ್ಟಿ (ದಿನಾಂಕ, ಸಮಯ ಮತ್ತು ಸ್ಥಳದ ವಿವರದೊಂದಿಗೆ) ಯ ಕುರಿತು ಅಧಿಸೂಚನೆ * ಪೂರಕ ಅಧಿಸೂಚನೆ ಸಂಖ್ಯೆ: KFD/HOFF/B9(MSC)/1/2020-PnR-KFD, dated: 02-05-2023ಕ್ಕೆ ತಿದ್ದುಪಡಿ. * 2023ನೇ ಕ್ಯಾಲೆಂಡರ್‌ ವರ್ಷದಲ್ಲಿ ವಿವಿಧ ಸರ್ಕಾರಿ ಮರಮಟ್ಟು ಸಂಗ್ರಹಾಲಯಗಳಲ್ಲಿ ಇ-ಹರಾಜು ಮಾಡಲು ದಿನಾಂಕಗಳನ್ನು ನಿಗಧಿಪಡಿಸುವ ಕುರಿತು. ದಿನಾಂಕ: 15-05-2023
ವೃಕ್ಷ ಉದ್ಯಾನವನ ಎಂಬುದು ಗಿಡಮೂಲಿಕೆಗಳು, ಪೊದೆಗಳು, ಬಳ್ಳಿಗಳು ಇತ್ಯಾದಿಗಳೊಂದಿಗೆ ಮುಖ್ಯವಾಗಿ ನೈಸರ್ಗಿಕ ಮತ್ತು ನೆಟ್ಟ ಮರಗಳ ಬೆಳವಣಿಗೆಯ ಪ್ರದೇಶವಾಗಿದೆ. ನಗರ ಸ್ಥಳಗಳಲ್ಲಿ ಅಥವಾ ಹತ್ತಿರದಲ್ಲಿ ವೃಕ್ಷ ಉದ್ಯಾನವನಗಳನ್ನು ರಚಿಸುವ ಉದ್ದೇಶವು ನಗರವಾಸಿಗಳಿಗೆ ಪ್ರವೇಶಿಸಬಹುದಾದ ದೂರದಲ್ಲಿ ಪ್ರಕೃತಿಯನ್ನು ಅನುಭವಿಸುವ ಅವಕಾಶವನ್ನು ಒದಗಿಸುವುದು. ವೃಕ್ಷ ಉದ್ಯಾನವನಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಕಾಲ್ನಡಿಗೆಯ ಪಥ, ಪ್ರಕೃತಿ ಹಾದಿಗಳು, ಕುಡಿಯುವ ನೀರಿನ ಸೌಲಭ್ಯಗಳು, ಮಕ್ಕಳ ಆಟದ ಪ್ರದೇಶ, ಶೌಚಾಲಯಗಳು ಮುಂತಾದ ಮೂಲಭೂತ ಸಾರ್ವಜನಿಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ವೃಕ್ಷ ಉದ್ಯಾನವನ ಯೋಜನೆಯು ನಗರವಾಸಿಗಳಿಗೆ ಪ್ರವೇಶಿಸಬಹುದಾದ ದೂರದಲ್ಲಿ ನೈಸರ್ಗಿಕ ಪರಿಸರವನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ನಗರಗಳು / ಪಟ್ಟಣಗಳ ಬಳಿ ವೃಕ್ಷ ಉದ್ಯಾನವನಗಳನ್ನು ಸ್ಥಾಪಿಸಲಾಗಿದೆ. ಇದರಿಂದ ನಗರವಾಸಿಗಳು ಪ್ರಕೃತಿಯನ್ನು ಅನುಭವಿಸಬಹುದು ಪ್ರಕೃತಿ ಜೊತೆಗೆ ವಾಕಿಂಗ್, ಜಾಗಿಂಗ್, ಸೈಕ್ಲಿಂಗ್, ಯೋಗ, ಧ್ಯಾನ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಹುದು. ಇದು ಅವರ ಆರೋಗ್ಯ ಮತ್ತು ಸಾಮಾನ್ಯ ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹೆಚ್ಚಿನ ಮರದ ಉದ್ಯಾನವನಗಳಲ್ಲಿ ಮಕ್ಕಳ ಆಟದ ಪ್ರದೇಶಗಳನ್ನು ಅವರ ಸಂತೋಷ ಮತ್ತು ದೈಹಿಕ ಚಟುವಟಿಕೆಗಳಿಗಾಗಿ ಅಭಿವೃದ್ಧಿಪಡಿಸಲಾಗಿದೆ.

ಪದೇಪದೆ ಕೇಳಲಾಗುವ ಪ್ರಶ್ನೆಗಳು (ಎಫ್‌ಎಕ್ಯೂ) ನೋಡಿ

  • ವೃಕ್ಷ ಉದ್ಯಾನ ಎಂದರೇನು

    ವೃಕ್ಷ ಉದ್ಯಾನ ಎಂದರೆ, ಗಿಡಮೂಲಿಕ, ಕುರುಚಲು ಗಿಡ, ಬಳ್ಳಿಗಳ ಜೊತೆಗೆ ನೈಸರ್ಗಿಕ ಮತ್ತು ನೆಟ್ಟ ಮರಗಳಿರುವ ಪ್ರದೇಶ. ನಗರ ಪ್ರದೇಶಗಳಲ್ಲಿ ಅಥವಾ ಸಮೀಪ ಮರ ಉದ್ಯಾನಗಳನ್ನು ಬೆಳೆಸುವ ಉದ್ದೇಶ ಏನೆಂದರೆ ಸಮೀಪದ ಪ್ರದೇಶದಲ್ಲಿ ನಗರವಾಸಿಗಳಿಗೆ ನಿಸರ್ಗದ ಅನುಭವ ಪಡೆಯಲು ಅವಕಾಶ ಕಲ್ಪಿಸುವುದು. ಇದರ ಜೊತೆಗೆ ನಡೆದಾಡುವ ಹಾದಿ, ನಿಸರ್ಗ ಹಾದಿ, ಕುಡಿಯುವ ನೀರಿನ ಸೌಕರ್ಯ, ಮಕ್ಕಳ ಆಟದ ಸ್ಥಳ, ಶೌಚಾಲಯಗಳು ಮುಂತಾದ ಸಾರ್ವಜನಿಕ ಮೂಲಸೌಕರ್ಯಗಳನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಮರ ಉದ್ಯಾನಗಳಲ್ಲಿ ನಿರ್ಮಾಣ ಮಾಡಲಾಗುತ್ತದೆ.

  • ವೃಕ್ಷ ಉದ್ಯಾನ ಯೋಜನೆಯನ್ನು ಕರ್ನಾಟಕ ಸರ್ಕಾರ ಯಾವ ವರ್ಷ ಆರಂಭಿಸಿತು

    ಕರ್ನಾಟಕ ಸರ್ಕಾರ ವೃಕ್ಷ ಉದ್ಯಾನ ಯೋಜನೆಯನ್ನು 2011-12ನೇ ಆರ್ಥಿಕ ವರ್ಷದಲ್ಲಿ ಆರಂಭಿಸಿತು.

  • ವೃಕ್ಷ ಉದ್ಯಾನ ಯೋಜನೆಯ ಉದ್ದೇಶಗಳು ಏನು

    ವೃಕ್ಷ ಉದ್ಯಾನ ನಗರವಾಸಿಗಳಲ್ಲಿ ಪರಿಸರದ ಬಗ್ಗೆ ಕಾಳಜಿ ಹೆಚ್ಚಿಸಲು ಅವರ ಸಮೀಪದ ಸ್ಥಳದಲ್ಲಿ ನೈಸರ್ಗಿಕ ವಾತಾವಾರಣ ಒದಗಿಸಲು ಉದ್ದೇಶ ಹೊಂದಿದೆ. ಮರ ಉದ್ಯಾನಗಳನ್ನು ನಗರಗಳು/ ಪಟ್ಟಣಗಳ ಸಮೀಪ ನಿರ್ಮಿಸಲಾಗಿದೆ ಇದರಿಂದ ಅವರು ನಡೆದಾಡುವುದು, ಜಾಗಿಂಗ್‌ ಮಾಡುವುದು, ಸೈಕ್ಲಿಂಗ್‌, ಯೋಗ, ಧ್ಯಾನ ಮುಂತಾದ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುತ್ತದೆ ಹಾಗೂ ಇದರಿಂದ ಅವರ ಆರೋಗ್ಯ ಮತ್ತು ಯೋಗಕ್ಷೇಮ ಸುಧಾರಿಸುತ್ತದೆ. ಹೆಚ್ಚಿನ ವೃಕ್ಷ ಉದ್ಯಾನಗಳಲ್ಲಿ ಮಕ್ಕಳ ಮನರಂಜನೆ ಮತ್ತು ದೈಹಿಕ ಚಟುವಟಿಕೆಗಳಿಗಾಗಿ ಮಕ್ಕಳ ಆಟದ ಸ್ಥಳವನ್ನು ನಿರ್ಮಿಸಲಾಗಿದೆ.

  • ಮರ ಉದ್ಯಾನ ಸ್ಕೀಮ್‌ ಅನುಷ್ಠಾನಕ್ಕೆ ಇರುವ ಮಾರ್ಗಸೂತ್ರಗಳು ಯಾವುವು

    ಮರ ಉದ್ಯಾನ ಸ್ಕೀಮ್‌ ವಿಶಿಷ್ಟ ಸ್ಕೀಮ್‌ ಆಗಿದ್ದು ಕರ್ನಾಟಕದಲ್ಲಿ ಮೊದಲ ಬಾರಿಗೆ ಆರಂಭಿಸಲಾಗಿದೆ. ಈ ಸ್ಕೀಮ್‌ ಇದರ ಆರಂಭದ ನಂತರ ವಿಕಸಿತಗೊಂಡಿದೆ ಮತ್ತು ಕಾಲಕಾಲಕ್ಕೆ ಮಾರ್ಗಸೂತ್ರಗಳನ್ನು ಜಾರಿ ಮಾಡಲಾಗಿದೆ. ಮಾರ್ಗಸೂತ್ರಗಳ ಅನುಸಾರ, ಎಲ್ಲ ಮರ ಉದ್ಯಾನಗಳು ಪ್ರಸ್ತುತ ನಡೆಯುತ್ತಿರುವ ಕೆಲಸಗಳು ಹಾಗೂ ಪ್ರಸ್ತಾವಿತ ಕಾರ್ಯಗಳ ಪಟ್ಟಿಯ ಜೊತೆಗೆ ಮರ ಉದ್ಯಾನದ ಸರ್ವೇ ಸ್ಕೆಚ್‌ನೊಂದಿಗೆ ವಿವರವಾದ ಯೋಜನಾ ವರದಿ(ಡಿಪಿಆರ್‌) ಹೊಂದಿರಬೇಕು. ಎಲ್ಲ ಚಟುವಟಿಕೆಗಳು ಡಿಪಿಆರ್ ಅನುಮೋದನೆಯ ಅನುಸಾರ ಇರಬೇಕು. ಪ್ರದೇಶದ ನಿರ್ದಿಷ್ಟ ಅಗತ್ಯಗಳನ್ನು ಪರಿಗಣಿಸುವುದರೊಂದಿಗೆ ಪ್ರದೇಶದ ನೈಸರ್ಗಿಕ ರಚನೆಯನ್ನು ಕಾಯ್ದುಕೊಳ್ಳುತ್ತಲೇ ಸಾರ್ವಜನಿಕರಿಗೆ ಮೂಲಸೌಕರ್ಯಗಳನ್ನು ಕಲ್ಪಿಸುವ ಉದ್ದೇಶವನ್ನು ಮರ ಉದ್ಯಾನ ಸ್ಕೀಮ್‌ ಹೊಂದಿದೆ. ಮಾರ್ಗಸೂತ್ರಗಳನ್ನು ಡೌನ್‌ಲೋಡ್ ಮಾಡಿ.

  • ಕರ್ನಾಟಕದಲ್ಲಿ ಎಷ್ಟು ಮರ ಉದ್ಯಾನಗಳನ್ನು ನಿರ್ಮಿಸಲಾಗಿದೆ

    2011-12ರಲ್ಲಿ ಮರ ಉದ್ಯಾನ ಸ್ಕೀಮ್‌ ಆರಂಭವಾದಾಗಿನಿಂದ, ಒಟ್ಟು 132 ಮರ ಉದ್ಯಾನಗಳನ್ನು ಅಭಿವೃದ್ಧಿಪಡಿಸಲಾಗಿದೆ.

  • ಮರ ಉದ್ಯಾನಗಳಿಂದ ಸಾರ್ವಜನಿಕರಿಗೆ ಸಿಗುವ ಪ್ರಯೋಜನಗಳೇನು

    ಮನರಂಜನೆ ಮತ್ತು ವಿರಾಮಕ್ಕೆ ಸ್ಥಳ ಒದಗಿಸುವುದರೊಂದಿಗೆ ಸಾರ್ವಜನಿಕರಲ್ಲಿ, ವಿಶೇಷವಾಗಿ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವ ಪ್ರಾಥಮಿಕ ಉದ್ದೇಶದಿಂದ ಮರ ಉದ್ಯಾನಗಳನ್ನು ನಿರ್ಮಿಸಲಾಗಿದೆ. ಮರಗಳನ್ನು ಬೆಳೆಸುವುದರಿಂದ ಸ್ವಚ್ಛ ಗಾಳಿ, ನೀರು, ಸುಧಾರಿತ ಅಂತರ್ಜಲ ಮುಂತಾದ ಪರಿಸರ ಪ್ರಯೋಜನಗಳು ಸಿಗುತ್ತವೆ.

  • ಕರ್ನಾಟಕ ಸರ್ಕಾರಕ್ಕೆ ಹೊಸ ಮರ ಉದ್ಯಾನಗಳನ್ನು ರಚಿಸುವ ಯೋಜನೆ ಇದೆಯೇ

    ಅನುದಾನದ ಲಭ್ಯತೆ ಮತ್ತು ಸಂಬಂಧಿತ ಪ್ರಾಧಿಕಾರದ ಅನುಮೋದನೆಗೆ ಒಳಪಟ್ಟು, ಇಲ್ಲಿಯವರೆಗೆ ಮರ ಉದ್ಯಾನದಡಿ ಬಳಸದ ಸೂಕ್ತ ಪ್ರದೇಶ ನಗರದ ಸಮೀಪ ಇದ್ದಲ್ಲಿ ಹೊಸ ಮರ ಉದ್ಯಾನಗಳನ್ನು ರಚಿಸಬಹುದು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕನಿಷ್ಟ ಒಂದು ಮರ ಉದ್ಯಾನವನ್ನು ನಿರ್ಮಿಸಲು ಸರ್ಕಾರ ಬದ್ಧವಾಗಿದೆ.

  • ಮರ ಉದ್ಯಾನಗಳ ನಿರ್ವಹಣೆಗೆ ಸಂಬಂಧಿಸಿ ಯಾವ ಕಾರ್ಯವಿಧಾನಗಳು ಜಾರಿಯಲ್ಲಿವೆ

    ಮರ ಉದ್ಯಾನಗಳ ನಿರ್ವಹಣೆಗಾಗಿ, ಸಂಬಂಧಿತ ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮತ್ತು ಇತರ ಇಲಾಖೆಗಳ ಪ್ರತಿನಿಧಿಗಳು, ಪ್ರದೇಶದ ಜನಪ್ರತಿನಿಧಿಗಳು, ಸ್ಥಳೀಯ ತಜ್ಞರು ಮುಂತಾದವರನ್ನು ಒಳಗೊಂಡ ಸಮಿತಿ ರಚಿಸಲಾಗುತ್ತದೆ. ಕೆಲವೊಮ್ಮೆ ಮರ ಉದ್ಯಾನಗಳ ನಿರ್ವಹಣೆಗೆ ಆರ್ಥಿಕ ನೆರವನ್ನೂ ನೀಡಲಾಗುತ್ತದೆ.

  • ಮರ ಉದ್ಯಾನಗಳ ನಿರ್ವಹಣೆಯಲ್ಲಿ ಸಾರ್ವಜನಿಕರ ಜವಾಬ್ದಾರಿಗಳು ಏನು

    ಮರ ಉದ್ಯಾನ ಸಾರ್ವಜನಿಕರಿಗಾಗಿ ಸೃಷ್ಟಿಸಿದ ಸೊತ್ತಾಗಿರುವುದರಿಂದ, ಅದನ್ನು ಸ್ವಚ್ಛವಾಗಿಸಿರಿಕೊಳ್ಳುವುದು ಮತ್ತು ಪ್ರದೇಶದಲ್ಲಿ ಕಸ ಎಸೆಯದೆ ಇರುವುದು ಅವರ ಜವಾಬ್ದಾರಿಯಾಗಿರುತ್ತದೆ. ಯಾವುದೇ ಅನಧಿಕೃತ ಅಥವಾ ಅಕ್ರಮ ಚಟುವಟಿಕೆ ಕಂಡುಬಂದರೆ ಅವರು ಸಂಬಂಧಿತ ಅರಣ್ಯ ಅಧಿಕಾರಿಗೆ ವರದಿ ಮಾಡಬೇಕು. ಬೆಂಕಿ ಆಕಸ್ಮಿಕಗಳು ಆದಲ್ಲಿ ಕೂಡ ಅವರು ಸಂಬಂಧಿತ ಅಧಿಕಾರಿಗಳಿಗೆ ಸಹಕರಿಸಬೇಕು.

  • ಮರ ಉದ್ಯಾನಗಳ ಸುಧಾರಣೆ ಮತ್ತು ನಿರ್ವಹಣೆಗೆ ಕಾರ್ಪೊರೆಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್‌) ನಿಧಿಗಳ ಬಳಕೆ ಮಾಡಬಹುದೇ

    ಸರ್ಕಾರದ ಅನುದಾನ ಸೀಮಿತವಾಗಿರುವುದರಿಂದ, ಮರ ಉದ್ಯಾನಗಳಿಗೆ ಸಿಎಸ್‌ಆರ್‌ ನಿಧಿ ಬಳಸಬಹುದಾಗಿದೆ. ಆದರೆ, ಸಂಬಂಧಿತ ಮರ ಉದ್ಯಾನಕ್ಕೆ ಅನುಮೋದಿತವಾಗಿರುವ ವಿವರವಾದ ಯೋಜನಾ ವರದಿಯ ಅನುಸಾರ ಯಾವುದೇ ಚಟುವಟಿಕೆಯನ್ನು ಕೈಗೊಳ್ಳಬೇಕು.